Tuesday, January 4, 2011

ಸಾಮ್ರಾಟ್ ನಿಗೆ ನುಡಿನಮನ

ಜಗನ್ನಾಥ ಮಂದಿರ ದಲಿ ಒಂದು ದಿನ 
ಶ್ರೀ ಶ್ರೀಗಳು ಭೇಟಿ ನೀಡಿದ ಅಮ್ರತ ಸಮಯ 
ಜಗನ್ನಾಥ ಮಂದಿರವ ಜಗವೇನ ಕಂಡಿತು 
ಅಚ್ಚರಿ ಪವಾಡ ಶ್ರೀ ಶ್ರೀಗಳಿಂದಲೇ ಸಂಭವಿಸಿತು 

ಗುಜರತಿನವ ಯಾರು ಗುರುತು ಹಿಡಿಯಲೋಲ್ಲರು 
ಗಾಡಿ ಎಳೆವ ಎತ್ತು ಇದೆಂದು ಗತ್ತಿನಲ್ಲಿ ಬಲ್ಲರು 
ಗೋ ಶಾಲೆಯ ಕಾಯಕದಲಿ ಗೌಣವಾಗಿ  ಮುಳುಗಿದ್ದ 
ವಿಶೇಷ ಕೂಡು ಪಡೆದು ವಿರಾಜಮಾನನಾಗಿ ಎದ್ದ .


ಸುತ್ತಲಿನ ಕಂಗಳಿಗೆ ಇವ ಸಾಮಾನ್ಯ ಕೂಲಿ
ಅಸಾಮಾನ್ಯ ಎವನೆಂದು ಕಂಡವರಾರು ಹೇಳಿ 
ಶ್ರೀ ಶ್ರೀಗಳ ಕಂಗಳಲಿ ಮಹಾರಾಜ ನಾಗಿ ಹೊಳೆದ 
ಮೆರೆವ ಸಾಮ್ರಾಟ್ ನಂತೆ ಶ್ರೀಗಳ ಮನ ಸೆಳೆದ 

ಅದ್ರಸ್ತ ವಿಲ್ಲಿ ಹರಸಿ ಶ್ರೀ ಮಠ ಕ್ಕೆ ದಾರಿ 
ಸಾಮ್ರಾಟ್ ನೆಂಬ ಶ್ರೀ ಹೆಸರು ಕೊಡುಗಳಿಗೆ ಗರಿ 
ವಿಶ್ವಗೋಸಮ್ಮೇಳನದಿ  ಸಾಮ್ರಾಟ್ ನೆ ಸಾರ್ವಭೌಮ 
ಪ್ರತ್ಯಕ್ಷ್ಕ್ಶ ನಂದಿ ಎಂದೇ ಜನ ಮನದಿ ಗೋ ಪ್ರೇಮ.

ಎರವಾಯಿತು ಊಟ ಮೊನ್ನೆ ಎಡವಿ ಬಿದ್ದು 
ಬಿದ್ದವ ಮೇಲೇಳಲಿಲ್ಲ  ಕೋಡು ಮುರಿದ ಸದ್ದು 
22 ರ ಹರೆಯ ಕಂಡೀತೆ ಕಾಲನ ಕರೆಯ 
ಕೋಡು ತೋರಿಸಿ ಕೋಡು ಮೂಡಿಸಿ ಮಾರೆಯಾದ ಗೆಳೆಯ .....
                                                                                  ಒಹಿಲೇಶ್ವರ್ ಬೆಂಗಲೂರು
  

No comments:

Post a Comment